ಪುತ್ತಿಗೆ ಮುಹಿಮ್ಮಾತ್‌ನಲ್ಲಿ ಭಕ್ತರ ಜನಸಾಗರ: ಉರೂಸ್ ಹಾಗೂ ಸನದ್ ದಾನ ಸಮ್ಮೇಳನಕ್ಕೆ ಶನಿವಾರ ಸಮಾಪ್ತಿ

Jan 30, 2026 - 11:21
ಪುತ್ತಿಗೆ ಮುಹಿಮ್ಮಾತ್‌ನಲ್ಲಿ ಭಕ್ತರ ಜನಸಾಗರ: ಉರೂಸ್ ಹಾಗೂ ಸನದ್ ದಾನ ಸಮ್ಮೇಳನಕ್ಕೆ ಶನಿವಾರ ಸಮಾಪ್ತಿ

ಪುತ್ತಿಗೆ: ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್‌ನ ಸಾರಥಿ ಮತ್ತು ಆಧ್ಯಾತ್ಮಿಕ ನಾಯಕರಾಗಿದ್ದ ಸಯ್ಯಿದ್ ತಾಹಿರುಲ್ ಅಹ್ದಲ್ ತಂಙಳ್ ಅವರ 20ನೇ ಉರೂಸ್ ಮುಬಾರಕ್ ಮತ್ತು ಸನದ್ ದಾನ ಸಮ್ಮೇಳನವು ಶನಿವಾರ ಸಾವಿರಾರು ಜನರಿಗೆ ಅನ್ನದಾನ ನೀಡುವ ಮೂಲಕ ಸಮಾಪ್ತಿಗೊಳ್ಳಲಿದೆ.

ನಿನ್ನೆ ಬೆಳಿಗ್ಗೆ ನಡೆದ ಹಜ್ ಪ್ರಾಯೋಗಿಕ ತರಬೇತಿ ಶಿಬಿರವು ಗಮನಾರ್ಹವಾಗಿತ್ತು. ಈ ವರ್ಷ ಹಜ್‌ಗೆ ಅರ್ಜಿ ಸಲ್ಲಿಸಿದ 500ಕ್ಕೂ ಹೆಚ್ಚು ಮಂದಿ ಈ ತರಗತಿಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಅಬ್ದುಲ್ ಕರೀಂ ಸಖಾಫಿ ಇಡುಕ್ಕಿ ತರಗತಿ ನಡೆಸಿಕೊಟ್ಟರು.

ಸಂಜೆ ನಡೆದ ಸ್ವಲಾತ್ ಮಜ್ಲಿಸ್‌ಗೆ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಬಾಯಾರ್ ತಂಗಳ್ ನೇತೃತ್ವ ನೀಡಿದರು. ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಸಯ್ಯಿದ್ ಶಹೀರ್ ತಂಙಳ್ ಉದ್ಘಾಟಿಸಿದರು. ರಾಫಿ ಹಿಮಮಿ ಎರುಮಾಡು ಮುಖ್ಯ ಪ್ರಭಾಷಣ ಮಾಡಿದರು ಮತ್ತು ಸಯ್ಯಿದ್ ಖಲೀಲ್ ಅಲ್ ಬುಖಾರಿ ಸಮಾರೋಪ ಪ್ರಾರ್ಥನೆ ನಡೆಸಿಕೊಟ್ಟರು.

ಇಂದಿನ ಕಾರ್ಯಕ್ರಮಗಳು: ಇಂದು ರಾತೀಬ್ ಮಜ್ಲಿಸ್ ಮತ್ತು ಧಾರ್ಮಿಕ ಪ್ರವಚನ ನಡೆಯಲಿದೆ. ಸಂಜೆ ನಡೆಯುವ ರಾತೀಬ್ ಮಜ್ಲಿಸ್‌ಗೆ ಹಮ್ಮಾದ್ ಹಸನ್ ಅಲ್ ಚಿಶ್ತಿ, ಸಯ್ಯಿದ್ ಪೂಕುಂಞಿ ತಂಙಳ್ ಆದೂರು, ಸಯ್ಯಿದ್ ಮುತ್ತುಕೋಯ ತಂಙಳ್ ಕಣ್ಣವಂ, ಅಲ್ಲಾಮ ಖಿಯಾಮ್ ರಝಾ ಖಾದಿರಿ ಮುಂತಾದವರು ನೇತೃತ್ವ ನೀಡಲಿದ್ದಾರೆ. ರಾತ್ರಿ ನಡೆಯುವ ಪ್ರವಚನದಲ್ಲಿ ಪಿ.ಎಸ್. ಆಟಕ್ಕೋಯ ತಂಙಳ್ ಪಂಜಿಕ್ಕಲ್ ಮತ್ತು ನೌಫಲ್ ಸಖಾಫಿ ಕಳಸ ಪಾಲ್ಗೊಳ್ಳಲಿದ್ದಾರೆ.

ಸನದ್ ದಾನ ಸಮ್ಮೇಳನ: ಶನಿವಾರ ನಡೆಯುವ ಮುಹಿಮ್ಮಾತ್ ಸನದ್ ದಾನ ಸಮ್ಮೇಳನದಲ್ಲಿ ಹಾಫಿಳ್‌ಗಳು ಮತ್ತು ಹಿಮಮಿಗಳಾದ 79 ವಿದ್ವಾಂಸರು ಸನದ್ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಇ. ಸುಲೈಮಾನ್ ಮುಸ್ಲಿಯಾರ್, ಅಲಿ ಬಾಫಕಿ ತಂಙಳ್, ಕುಂಬೋಲ್ ಕೆ.ಎಸ್. ಆಟಕ್ಕೋಯ ತಂಙಳ್ ಮೊದಲಾದವರು ಭಾಗವಹಿಸಲಿದ್ದಾರೆ.

ಅಹ್ದಲ್ ತಂಙಳ್ ಅವರ ಝಿಯಾರತ್ ಮಾಡಲು ಮತ್ತು ಸಂಸ್ಥೆಯನ್ನು ಸಂದರ್ಶಿಸಲು ನಾಡಿನ ವಿವಿಧೆಡೆಗಳಿಂದ ಭಕ್ತರ ಸಾಗರವೇ ಹರಿದು ಬರುತ್ತಿದೆ. ಎಲ್ಲರನ್ನು ಸ್ವಾಗತಿಸಲು ವಿಶೇಷ ವಲಂಟಿಯರ್ ವಿಂಗ್ ಮತ್ತು ಸ್ವಾಗತ ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0