ಮುಹಿಮ್ಮಾತ್ ಅಹ್ದಲ್ ಉರೂಸ್; ಮೊಹಲ್ಲಾ, ಯೂನಿಟ್ ಸಮಾವೇಶಗಳಿಗೆ ಚಾಲನೆ
ಪುತ್ತಿಗೆ: ಜನವರಿ 28, 29, 30 ಮತ್ತು 31 ರಂದು ಮುಹಿಮ್ಮಾತ್ನಲ್ಲಿ ನಡೆಯಲಿರುವ ಸಯ್ಯಿದ್ ತ್ವಾಹಿರುಲ್ ಅಹ್ದಲ್ 20ನೇ ಉರೂಸ್ ಮತ್ತು ಮುಹಿಮ್ಮಾತ್ ಸನದ್ ದಾನ ಸಮ್ಮೇಳನದ ಪ್ರಚಾರಾರ್ಥವಾಗಿ ಆಯೋಜಿಸಲಾದ ಮೊಹಲ್ಲಾ, ಯೂನಿಟ್ ಸಮಾವೇಶಗಳ ಜಿಲ್ಲಾ ಮಟ್ಟದ ಉದ್ಘಾಟನೆಯು ಪುತ್ತಿಗೆಯ ಉರುಮಿಯಲ್ಲಿ ನಡೆಯಿತು.
ಎಸ್.ಎಸ್.ಎಫ್. ರಾಜ್ಯ ಅಧ್ಯಕ್ಷರಾದ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಅವರು ಉದ್ಘಾಟನೆ ನೆರವೇರಿಸಿದರು. ಮುಹಿಮ್ಮಾತ್ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಅವರು ಸ್ಮರಣಾರ್ಥ ಪ್ರಭಾಷಣ ಮಾಡಿದರು. ಅಬ್ಬಾಸ್ ಸಖಾಫಿ ಮಂಟಮ ಅವರು ಮಹ್ಳರತ್ತುಲ್ ಬದ್ರಿಯ ಮಜ್ಲಿಸ್ಗೆ ನೇತೃತ್ವ ನೀಡಿದರು. ವೈ ಎಂ ಅಬ್ದುರ್ರಹ್ಮಾನ್ ಅಹ್ಸನಿ ಅವರು ಸಮಾರೋಪ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಉಮರ್ ಸಖಾಫಿ ಕೊಂಬೋಡ್, ಅಬ್ದುಲ್ ಅಸೀಸ್ ಹಿಮಮಿ, ಅಶ್ರಫ್ ಸಖಾಫಿ ಉಳುವಾರ್, ಉಮರ್ ಸಖಾಫಿ ಕೋಳಿಯೂರ್, ಹಮೀದ್ ಪಿ ಕೆ, ಎಸ್ ಹಮೀದ್, ಎಂ ಅಶ್ರಫ್, ಪಿ ಕೆ ಜುನೈದ್, ಶಿಹಾಬ್ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



