ಮುಹಿಮ್ಮಾತ್ ಸಯ್ಯಿದ್ ತಾಹಿರುಲ್ ಅಹ್ದಲ್ ತಂಙಳ್ ಉರೂಸ್ 28ರಿಂದ ಆರಂಭ: ಶನಿವಾರ ಸನದುದಾನ ಮತ್ತು ಆತ್ಮೀಯ ಸಮ್ಮೇಳನ

Jan 27, 2026 - 17:40
ಮುಹಿಮ್ಮಾತ್ ಸಯ್ಯಿದ್ ತಾಹಿರುಲ್ ಅಹ್ದಲ್ ತಂಙಳ್ ಉರೂಸ್ 28ರಿಂದ ಆರಂಭ: ಶನಿವಾರ ಸನದುದಾನ ಮತ್ತು ಆತ್ಮೀಯ ಸಮ್ಮೇಳನ

ಕಾಸರಗೋಡು: ಮುಹಿಮ್ಮಾತ್ ಶಿಲ್ಪಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ ಇಪ್ಪತ್ತನೇ ಉರೂಸ್ ಮುಬಾರಕ್ ಮತ್ತು ಸಂಸ್ಥೆಯ ಪದವಿ ಪ್ರದಾನ ಸಮಾವೇಶವು ಈ ತಿಂಗಳ 28 ರಿಂದ ಮುಹಿಮ್ಮಾತ್‌ನಲ್ಲಿ ನಡೆಯಲಿದೆ. 31 ರಂದು ಶನಿವಾರ ಸಂಜೆ ನಡೆಯುವ ಸನದುದಾನ ಅಹ್ದಲಿಯಾ ಆಧ್ಯಾತ್ಮಿಕ ಸಮಾವೇಶದೊಂದಿಗೆ ಇದು ಸಮಾರೋಪಗೊಳ್ಳಲಿದೆ. ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್, ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಸೇರಿದಂತೆ ಪ್ರಮುಖರು ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಝಿಯಾರತ್, ವಿಲಂಬರ ರ‍್ಯಾಲಿ, ಖುರ್ಆನ್ ದೌರಾ, ತಮಿಳು ಪ್ರತಿನಿಧಿ ಸಮಾವೇಶ, ಸ್ವಲಾತ್ ಮಜ್ಲಿಸ್, ಮತ ಪ್ರವಚನ, ರಾತೀಬ್-ಮೌಲಿದ್ ಮಜ್ಲಿಸ್‌ಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಉರೂಸ್ ಭಾಗವಾಗಿ ನಡೆಯಲಿವೆ.

ಬುಧವಾರ ಮಧ್ಯಾಹ್ನ 2:30ಕ್ಕೆ ಇಚ್ಚಿಲಂಗೋಡು ಮಖಾಂ ಝಿಯಾರತ್‌ನೊಂದಿಗೆ ಅಧಿಕೃತ ಚಾಲನೆ ದೊರೆಯಲಿದೆ. ಸಯ್ಯಿದ್ ಮುಹಮ್ಮದ್ ಮದನಿ ತಂಙಳ್ ಮೊಗ್ರಾಲ್ ಝಿಯಾರತ್ ನೇತೃತ್ವ ವಹಿಸಲಿದ್ದಾರೆ. ಅಂದು ಸಂಜೆ ನಾಲ್ಕು ಗಂಟೆಗೆ ಮುಗು ರೋಡ್‌ನಿಂದ ಆರಂಭವಾಗುವ ವಿಲಂಬರ ರ‍್ಯಾಲಿಯಲ್ಲಿ ನೂರಾರು ಜನರು ಪಾಲ್ಗೊಳ್ಳಲಿದ್ದಾರೆ. ಸಯ್ಯಿದ್ ತಾಹಿರುಲ್ ಅಹ್ದಲ್ ತಂಙಳ್ ಮಖಾಂನಲ್ಲಿ ಸಮೂಹ ಝಿಯಾರತ್ ನಂತರ ಸ್ವಾಗತ ಸಮಿತಿ ಅಧ್ಯಕ್ಷ ಸಯ್ಯಿದ್ ಸೈನುಲ್ ಆಬಿದೀನ್ ತಂಙಳ್ ಎನ್ಮೂರು ಪತಾಕೆ ಏರಿಸಲಿದ್ದಾರೆ. ದೌರತುಲ್ ಖುರ್ಆನ್‌ಗೆ ಸಯ್ಯಿದ್ ಮುಹಮ್ಮದ್ ಇಬ್ರಾಹಿಂ ಪೂಕುಂಞಿ ತಂಙಳ್ ಕಲ್ಲಕಟ್ಟ ನೇತೃತ್ವ ನೀಡಲಿದ್ದಾರೆ. ಸಂಜೆ 6:30ಕ್ಕೆ ಉರೂಸ್ ಉದ್ಘಾಟನಾ ಸಮಾವೇಶವು ಸಯ್ಯಿದ್ ಇಬ್ರಾಹಿಂ ಹಾದಿ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಎ.ಪಿ. ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋತ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಫಕ್ರುದ್ದೀನ್ ಹದ್ದಾದ್ ತಂಙಳ್ ಪ್ರಾರ್ಥನೆ ನಡೆಸಲಿದ್ದಾರೆ.

ಗುರುವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಹಜ್ ಅಧ್ಯಯನ ಶಿಬಿರಕ್ಕೆ ಅಬ್ದುಲ್ ಕರೀಂ ಸಖಾಫಿ ಇಡುಕ್ಕಿ ನೇತೃತ್ವ ನೀಡಲಿದ್ದಾರೆ. ಮಧ್ಯಾಹ್ನ ಎರಡಕ್ಕೆ ತಮಿಳು ಪ್ರತಿನಿಧಿ ಸಮಾವೇಶವು ಸಯ್ಯಿದ್ ಹಬೀಬ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಎಸ್.ಎಸ್.ಎಫ್ ನ್ಯಾಷನಲ್ ಸೆಕ್ರೆಟರಿ ಕಮಾಲುದ್ದೀನ್ ಸಖಾಫಿ ಚೆನ್ನೈ ಉದ್ಘಾಟಿಸಲಿದ್ದಾರೆ. ಸಂಜೆ 6:30ಕ್ಕೆ ಸ್ವಲಾತ್ ಮಜ್ಲಿಸ್ ಅನ್ನು ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಉದ್ಘಾಟಿಸಲಿದ್ದಾರೆ. ರಾಫಿ ಹಿಮಮಿ ಕಾಮಿಲ್ ಸಖಾಫಿ ಮತ ಪ್ರವಚನ ನಡೆಸಲಿದ್ದಾರೆ. ಸಯ್ಯಿದ್ ಶಹೀರ್ ಅಲ್ ಬುಖಾರಿ ಮಳ್ಹರ್ ಸಮಾರೋಪ ಪ್ರಾರ್ಥನೆ ನಡೆಸಲಿದ್ದಾರೆ. ಶುಕ್ರವಾರ ಮಧ್ಯಾಹ್ನ ಎರಡಕ್ಕೆ ರಿಫಾಯೀ ರಾತೀಬ್ ಮತ್ತು ಸಂಜೆ ನಾಲ್ಕಕ್ಕೆ ಮುಹಿಯ್ಯುದ್ದೀನ್ ರಾತೀಬ್ ನಡೆಯಲಿದೆ. ರಾತ್ರಿ ಏಳು ಗಂಟೆಗೆ ನೌಫಲ್ ಸಖಾಫಿ ಕಳಸ ಮತ ಪ್ರವಚನ ನಡೆಸಲಿದ್ದಾರೆ. ಸಮಾರೋಪ ಪ್ರಾರ್ಥನೆಗೆ ಸಯ್ಯಿದ್ ಪಿ.ಎಸ್. ಆಟಕ್ಕೋಯ ತಂಙಳ್ ಅಲ್ ಬಾ ಹಸನ್ ಪಂಚಿಕ್ಕಲ್ ನೇತೃತ್ವ ನೀಡಲಿದ್ದಾರೆ.

ಸಮಾರೋಪ ದಿನವಾದ ಶನಿವಾರ ಬೆಳಿಗ್ಗೆ ಖುರ್ಆನ್ ಅಧ್ಯಯನ ಪೂರೈಸಿದ ಹಾಫಿಝ್‌ಗಳಿಗೆ ಮತ್ತು ಹಿಮಮಿ ಪಂಡಿತರಿಗೆ ಸ್ಥಾನವಸ್ತ್ರ ವಿತರಿಸಲಾಗುವುದು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಮುಹಮ್ಮದಲಿ ಸಖಾಫಿ ತೃಕ್ಕರಿಪುರ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 9:30ಕ್ಕೆ ಮೌಲಿದ್ ಮಜ್ಲಿಸ್‌ಗೆ ಸಯ್ಯಿದ್ ಜಲಾಲುದ್ದೀನ್ ಬುಖಾರಿ ಸಅದಿ, ಸಯ್ಯಿದ್ ಸ್ವಲಿಹ್ ತುರಾಬ್ ತಂಙಳ್ ನೇತೃತ್ವ ನೀಡಲಿದ್ದಾರೆ. ಬೆಳಿಗ್ಗೆ 11ಕ್ಕೆ ಖತಮ್ ದುಆ ಮಜ್ಲಿಸ್‌ಗೆ ಸ್ವಲಿಹ್ ಸಅದಿ ತಳಿಪರಂಬ ನೇತೃತ್ವ ನೀಡಲಿದ್ದಾರೆ. ಮಧ್ಯಾಹ್ನ ಎರಡಕ್ಕೆ ಸಾಂಸ್ಕೃತಿಕ ಸಮಾವೇಶವನ್ನು ಕೂಟಂಬಾರ ಅಬ್ದುಲ್ ರಹಮಾನ್ ದಾರಿಮಿ ಉದ್ಘಾಟಿಸಲಿದ್ದಾರೆ. ಎ.ಕೆ.ಎಂ. ಅಶ್ರಫ್ ಎಂಎಲ್‌ಎ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಮೊದಲಾದವರು ಮಾತನಾಡಲಿದ್ದಾರೆ.

ಸಂಜೆ 6:30ಕ್ಕೆ ನಡೆಯುವ ಸನದುದಾನ ಅಹ್ದಲಿಯಾ ಆಧ್ಯಾತ್ಮಿಕ ಸಮಾವೇಶವು ಸಯ್ಯಿದ್ ಅಲಿ ಬಾಫಕಿ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಗಲಿದೆ. ಎಸ್.ಎಸ್.ಎಫ್ ರಾಜ್ಯ ಅಧ್ಯಕ್ಷ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಅಬ್ದುಲ್ಲಾ ಕುಂಞಿ ಫೈಝಿ ಅವರ ಅಧ್ಯಕ್ಷತೆಯಲ್ಲಿ ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಸನದುದಾನ ನೆರವೇರಿಸಲಿದ್ದಾರೆ. ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್ ಸನದುದಾನ ಪ್ರವಚನ ನಡೆಸಲಿದ್ದಾರೆ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪೇರೋಡು ಅಬ್ದುರ್ರಹ್ಮಾನ್ ಸಖಾಫಿ, ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ, ಸಯ್ಯಿದ್ ಹಸನ್ ಅಹ್ದಲ್ ತಂಙಳ್, ಸಿ. ಮುಹಮ್ಮದ್ ಫೈಝಿ, ವಿ.ಪಿ.ಎಂ. ಫೈಝಿ ವಿಲ್ಯಪಳ್ಳಿ, ಕೆ.ಪಿ. ಅಬೂಬಕ್ಕರ್ ಮುಸ್ಲಿಯಾರ್, ಅಬ್ದುಲ್ ಹಕೀಮ್ ಅಝ್ಹರಿ, ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ ಮೊದಲಾದವರು ಮಾತನಾಡಲಿದ್ದಾರೆ. ಸಾವಿರಾರು ಜನರಿಗೆ ತಬರುಕ್ ವಿತರಿಸುವುದರೊಂದಿಗೆ ಸಮಾರೋಪಗೊಳ್ಳಲಿದೆ. 68 ಹಿಮಮಿಗಳು ಮತ್ತು 11 ಹಾಫಿಝ್‌ಗಳು ಈ ವರ್ಷ ಮುಹಿಮ್ಮಾತ್‌ನಿಂದ ಧಾರ್ಮಿಕ ಅಧ್ಯಯನ ಪೂರೈಸಿ ಸನದು ಸ್ವೀಕರಿಸುತ್ತಿದ್ದಾರೆ.

ಉತ್ತರ ಕೇರಳ ಮತ್ತು ದಕ್ಷಿಣ ಕನ್ನಡದ ಪ್ರಮುಖ ಉರೂಸ್ ಮುಹಿಮ್ಮಾತ್‌ನಲ್ಲಿ ನಡೆಯುತ್ತಿದೆ. ಸ್ವಾಗತ ಸಮಿತಿಯಲ್ಲದೆ ಖದಮುಲ್ ಅಹ್ದಲಿಯಾ ಹೆಸರಿನಲ್ಲಿ 313 ಸದಸ್ಯರ ವಲಂಟಿಯರ್ ತಂಡವೂ ಸಜ್ಜಾಗಿದೆ. ನಾಡಿನ ಆಧ್ಯಾತ್ಮಿಕ ಉತ್ಸವವೇ ಮುಹಿಮ್ಮಾತ್ ಉರೂಸ್.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು: ಬಿ.ಎಸ್. ಅಬ್ದುಲ್ಲಾ ಕುಂಞಿ ಫೈಝಿ (ಪ್ರಧಾನ ಕಾರ್ಯದರ್ಶಿ ಮುಹಿಮ್ಮಾತ್) ಹಾಜಿ ಅಮೀರ್ ಅಲಿ ಚೂರಿ (ಖಜಾಂಚಿ, ಮುಹಿಮ್ಮಾತ್) ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ (ಉಪಾಧ್ಯಕ್ಷರು ಮುಹಿಮ್ಮಾತ್) ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ (ಕಾರ್ಯದರ್ಶಿ ಮುಹಿಮ್ಮಾತ್ ಮತ್ತು ಎಸ್.ಎಸ್.ಎಫ್ ಕೇರಳ ಅಧ್ಯಕ್ಷರು) ಅಬೂಬಕ್ಕರ್ ಕಾಮಿಲ್ ಸಖಾಫಿ (ಸ್ವಾಗತ ಸಮಿತಿ ಜನರಲ್ ಕನ್ವೀನರ್)

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0