ಮುಹಿಮ್ಮಾತ್ ಅಹ್ದಲ್ ಉರೂಸ್: 'ಮದದ್' ಅಧ್ಯಾತ್ಮಿಕ ಝಿಯಾರತ್ ಯಾತ್ರೆ ಇಂದು
ಪುತ್ತಿಗೆ: ಈ ತಿಂಗಳ 28 ರಿಂದ 31 ರವರೆಗೆ ನಡೆಯಲಿರುವ ಸಯ್ಯಿದ್ ತ್ವಾಹಿರುಲ್ ಅಹ್ದಲ್ 20ನೇ ಉರೂಸ್ ಮತ್ತು ಮುಹಿಮ್ಮಾತ್ ಸನದ್ ದಾನ ಸಮ್ಮೇಳನದ ಭಾಗವಾಗಿ ಹಮ್ಮಿಕೊಳ್ಳಲಾದ 'ಮದದ್' ಅಧ್ಯಾತ್ಮಿಕ ಝಿಯಾರತ್ ಯಾತ್ರೆಯು ಇಂದು ನಡೆಯಲಿದೆ. 1992 ರಲ್ಲಿ ರೂಪಗೊಂಡ ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ನ ಸ್ಥಾಪನೆಯ ಕಾಲದಲ್ಲಿ ಮತ್ತು ಸಂಸ್ಥೆಯ ಬೆಳವಣಿಗೆಯ ಹಂತಗಳಲ್ಲಿ ಪ್ರಮುಖ ಪಾತ್ರ ವಹಿಸಿ ಮಾರ್ಗದರ್ಶನ ನೀಡಿದ ಮಹಾನ್ ನಾಯಕರನ್ನು ಸ್ಮರಿಸುತ್ತಾ ಸಂಸ್ಥೆಯ ಪ್ರಮುಖರು ಈ ಯಾತ್ರೆಯ ನೇತೃತ್ವ ವಹಿಸಲಿದ್ದಾರೆ.
ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಬುಖಾರಿ, ನೂರುಲ್ ಉಲಮಾ ಎಂ.ಎ. ಅಬ್ದುಲ್ ಖಾದರ್ ಮುಸ್ಲಿಯಾರ್, ಕನ್ಸುಲ್ ಉಲಮಾ ಚಿತ್ತಾರಿ ಹಂಸ ಮುಸ್ಲಿಯಾರ್, ತಾಜುಶ್ಶರೀಅ ಅಲಿಕುಂಞಿ ಮುಸ್ಲಿಯಾರ್ ಶಿರಿಯ, ಸಯ್ಯಿದ್ ಹಾಮಿದ್ ಕೋಯಮ್ಮ ತಂಙಳ್ ಮಾಟೂಲ್, ಕುರ್ರತು ಸಾದಾತ್ ಸಯ್ಯಿದ್ ಫಸಲ್ ಕೋಯಮ್ಮ ತಂಙಳ್, ಸಯ್ಯಿದ್ ಉಮರುಲ್ ಫಾರೂಕ್ ಬುಖಾರಿ ಪೋಸೋಟ್, ಮಂಜನಾಡಿ ಅಬ್ಬಾಸ್ ಮುಸ್ಲಿಯಾರ್, ಬೇಕಲ್ ಇಬ್ರಾಹಿಂ ಮುಸ್ಲಿಯಾರ್, ಸಿ. ಕುಞಹಮ್ಮದ್ ಮುಸ್ಲಿಯಾರ್ ತೃಕ್ಕರಿಪುರ, ಆಲಂಪಾಡಿ ಉಸ್ತಾದ್ ಮತ್ತು ಮಂಜನಾಡಿ ಉಸ್ತಾದ್ ಅವರಂತಹ ಮಹನೀಯರ ಸನ್ನಿಧಿಗೆ ಮುಹಿಮ್ಮಾತ್ ನಾಯಕರು ಮದದ್ ಅರಸಿ ತಲುಪಲಿದ್ದಾರೆ.
ಈ ಯಾತ್ರಾ ಸಂಘಕ್ಕೆ ಸಯ್ಯಿದ್ ಮುನೀರ್ ಅಹ್ದಲ್ ತಂಙಳ್, ಸಯ್ಯಿದ್ ಹುಸೈನ್ ಅಮೀನ್ ಅಹ್ದಲ್ ತಂಙಳ್, ಬಿ.ಎಸ್. ಅಬ್ದುಲ್ಲಾ ಕುಂಞಿ ಫೈಝಿ, ಅಬ್ದುರ್ರಹ್ಮಾನ್ ಅಹ್ಸನಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸಾ ಸಖಾಫಿ ಕಳತ್ತೂರು, ಅಬೂಬಕರ್ ಕಾಮಿಲ್ ಸಖಾಫಿ, ಅಬ್ದುರ್ರಹ್ಮಾನ್ ಅಹ್ಸನಿ, ಉಮರ್ ಸಖಾಫಿ ಕರ್ನೂರು ಮತ್ತು ಹಾಜಿ ಅಮೀರಲಿ ಚೂರಿ ಮೊದಲಾದವರು ನೇತೃತ್ವ ನೀಡಲಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



