ಮುಹಿಮ್ಮಾತ್ ಅಹ್ದಲ್ ಉರೂಸ್: ಕುಂಬಳ ವಲಯ ಪ್ರಚಾರ ಸಮಿತಿ ರಚನೆ

Jan 19, 2026 - 12:33
ಮುಹಿಮ್ಮಾತ್ ಅಹ್ದಲ್ ಉರೂಸ್: ಕುಂಬಳ ವಲಯ ಪ್ರಚಾರ ಸಮಿತಿ ರಚನೆ

ಕುಂಬಳ: ಈ ತಿಂಗಳ 28 ರಿಂದ 31 ರವರೆಗೆ ನಡೆಯಲಿರುವ ಸಯ್ಯಿದ್ ತಾಹಿರುಲ್ ಅಹ್ದಲ್ 20ನೇ ಉರೂಸ್ ಮತ್ತು ಮುಹಿಮ್ಮಾತ್ ಸನದ್ ದಾನ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕುಂಬಳ ವಲಯ ಪ್ರಚಾರ ಸಮಿತಿಯನ್ನು ರಚಿಸಲಾಗಿದೆ. ಕುಂಬಳದ ಶಾಂತಿಪಳ್ಳದಲ್ಲಿ ನಡೆದ ಕನ್ವೆನ್ಷನ್ ಅನ್ನು ಲತೀಫ್ ಕಾಮಿಲ್ ಸಖಾಫಿ ಮೊಗ್ರಲ್ ಅವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಉದ್ಘಾಟಿಸಿದರು. ಅಬ್ಬಾಸ್ ಸಖಾಫಿ ಮಂಟಮೆ ವಿಷಯ ಮಂಡನೆ ಮಾಡಿದರು.

ಪ್ರಚಾರ ಸಮಿತಿಯ ಪದಾಧಿಕಾರಿಗಳು:

  • ಚೇರ್ಮನ್: ಅಬ್ಬಾಸ್ ಸಖಾಫಿ ಮಂಟಮೆ

  • ಕನ್ವೀನರ್: ನಸೀರ್ ಬಾಖವಿ

  • ಫೈನಾನ್ಸ್: ಅಲಿ ಬಂಬ್ರಾಣ

  • ಕೋ-ಆರ್ಡಿನೇಟರ್: ನಸೀರ್ ಹಿಮಮಿ

  • ವೈಸ್ ಚೇರ್ಮನ್: ಕುಡ್ಯಾಳಂ ಮುಹಮ್ಮದ್ ಸಖಾಫಿ, ಮಮ್ಮಿ ಹಾಜಿ ಪಳ್ಳಂ

  • ಜೊತೆ ಕನ್ವೀನರ್: ಶಾಹುಲ್ ಹಮೀದ್ ಸಅದಿ, ಹಂಸ ನಿಸಾಮಿ

ಸರ್ಕಲ್ ಉಸ್ತುವಾರಿಗಳು: ಫಾರೂಕ್ ಸಖಾಫಿ, ಬಾಬಿರ್ ಮುಈನಿ, ಶಾಹುಲ್ ಹಮೀದ್ ಸಅದಿ, ಅಶ್ರಫ್ ಸಖಾಫಿ ಮತ್ತು ಸುಬೈರ್ ಬಾಡೂರ್ ಅವರಿಗೆ ವಿವಿಧ ಸರ್ಕಲ್‌ಗಳ ಜವಾಬ್ದಾರಿಯನ್ನು ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಅಶ್ರಫ್ ಸಖಾಫಿ ಉಳುವಾರ್ ಸ್ವಾಗತಿಸಿದರು ಮತ್ತು ಫಾರೂಕ್ ಸಖಾಫಿ ಕರ ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0