ಎಸ್‌ವೈ‌ಎಸ್ ಮಾಣಿ ಸರ್ಕಲ್ ಸಮಿತಿ ವತಿಯಿಂದ C-Team ಕಾರ್ಯಾಗಾರ

Jul 24, 2025 - 09:51
Jul 24, 2025 - 10:32
ಎಸ್‌ವೈ‌ಎಸ್ ಮಾಣಿ ಸರ್ಕಲ್ ಸಮಿತಿ ವತಿಯಿಂದ C-Team ಕಾರ್ಯಾಗಾರ

ಮಾನವೀಯ ಮೌಲ್ಯಗಳನ್ನು ಅರಿತು ಬಾಳಿರಿ : ಅಬ್ದುಲ್ ಜಲೀಲ್ ಸಖಾಫಿ ಕರ್ನೂರು

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈ‌ಎಸ್ ಮಾಣಿ ಸರ್ಕಲ್ ಸಮಿತಿ ವತಿಯಿಂದ C- Team ಕಾರ್ಯಾಗಾರ ಕಾರ್ಯಕ್ರಮವು ಆದಿತ್ಯವಾರದಂದು ಸೂರಿಕುಮೇರು ಸಂಜರಿ ಹಾಲ್ ನಲ್ಲಿ ನಡೆಯಿತು. ಹೈದರ್ ಸಖಾಫಿ ಬುಡೋಳಿ ಕಾರ್ಯಕ್ರಮ ಉದ್ಘಾಟಿಸಿದರು, ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ಪ್ರಾಸ್ತಾವಿಕ ಭಾಷಣ ಮಾಡಿದರು, ಅಬ್ದುಲ್ ಅಝೀಝ್ ಚೆನ್ನಾರ್ ಕಡತ ನಿರ್ವಹಣಾ ತರಗತಿ ನಡೆಸಿಕೊಟ್ಟರು,ಅಬ್ದುಲ್ ಜಲೀಲ್ ಸಖಾಫಿ ಕರ್ನೂರು ಸಂಘಟನಾ ಕಾರ್ಯ ನಿರ್ವಹಣೆಯ ಬಗ್ಗೆ ತರಗತಿ ನಡೆಸಿ ಮಾತನಾಡಿದರು,ಕಾರ್ಯಕ್ರಮದಲ್ಲಿ SJM ರಾಜ್ಯ ಸಮಿತಿಯ ತರಬೇತುದಾರ ಸಿನಾನ್ ಮದನಿ ಮಾಣಿ,ಸರ್ಕಲ್ ಸಮಿತಿ ಉಸ್ತುವಾರಿ ಅಬ್ದುಲ್ ರಹ್ಮಾನ್ ಕೆಮ್ಮಾಯಿ,ಪುತ್ತೂರು ಝೋನ್ ಕೋಶಾಧಿಕಾರಿ, ಶಾಹುಲ್ ಹಮೀದ್ ಕಬಕ,ಸಂಘಟನಾ ಕಾರ್ಯದರ್ಶಿ ಫವಾಝ್ ಕಟ್ಟತ್ತಾರ್,ಇಸಾಬಾ ನಾಯಕ ಅಬ್ದುಲ್ಲಾ ಕಾವು,ಹವ್ಯಾಸಿ ಪತ್ರಕರ್ತ ಸಲೀಂ ಮಾಣಿ,ಮುಸ್ಲಿಂ ಜಮಾಅತ್ ನಾಯಕರಾದ ಯೂಸುಫ್ ಹಾಜಿ ಸೂರಿಕುಮೇರು, ನಾಯಕರಾದ ಜಲೀಲ್ ಮುಸ್ಲಿಯಾರ್ ಕೊಡಾಜೆ,ಕಲಂದರ್ ಬುಡೋಳಿ,ಸಾಜಿದ್ ಪಾಟ್ರಕೋಡಿ,ಮಜೀದ್ ಪಾಟ್ರಕೋಡಿ,ಅಬ್ದುಲ್ ಕರೀಂ ಸೂರಿಕುಮೇರು, ಹಂಝ ಸೂರಿಕುಮೇರು,ಹಬೀಬ್ ಶೇರಾ,ಇಸ್ಮಾಯಿಲ್ ಹಾಜಿ ಬುಡೋಳಿ, ಮುಂತಾದವರು ಉಪಸ್ಥಿತರಿದ್ದರು,ಏಳು ಯುನಿಟ್ ಗಳ ನೂರಾರು ಕಾರ್ಯಕರ್ತರು ಕಾರ್ಯಾಗಾರದಲ್ಲಿ ಪಾಲ್ಗೊಂಡು ತರಬೇತಿ ಪಡೆದರು,ರಫೀಕ್ ಮದನಿ ಪಾಟ್ರಕೋಡಿ ರವರ ಅಧ್ಯಕ್ಷತೆಯಲ್ಲಿ, ಕಾರ್ಯದರ್ಶಿ ಫಾರೂಕ್ ಹನೀಫಿ ಪರ್ಲೊಟ್ಟು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಕಾಸಿಂ ಮುಸ್ಲಿಯಾರ್ ಸೂರ್ಯ ಧನ್ಯವಾದ ನಡೆಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0