SYS ಕರ್ನಾಟಕ ರಾಜ್ಯ: ಕರಾವಳಿಯ ನೆಲದಲ್ಲಿ 'ಸೌಹಾರ್ದ ಸಂಚಾರ' ಜುಲೈ 14, 15, 16

Jul 10, 2025 - 10:23
SYS ಕರ್ನಾಟಕ ರಾಜ್ಯ:  ಕರಾವಳಿಯ ನೆಲದಲ್ಲಿ 'ಸೌಹಾರ್ದ ಸಂಚಾರ' ಜುಲೈ 14, 15, 16

ಕರಾವಳಿ ಕರ್ನಾಟಕದಲ್ಲಿ  ಸೌಹಾರ್ದ ಸಂದೇಶಗಳನ್ನು ಹರಡುವ ಸಲುವಾಗಿ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು "ಹೃದಯ ಹೃದಯಗಳನ್ನು ಬೆಸೆಯೋಣ" ಎಂಬ ಧ್ಯೇಯ ವಾಕ್ಯದೊಂದಿಗೆ ಕರಾವಳಿಯ ನೆಲದಲ್ಲಿ 'ಸೌಹಾರ್ದ ಸಂಚಾರ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದೇ ಬರುವ 2025 ಜುಲೈ 14, 15, 16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸರ್ವ ಮತೀಯರೂ ಜೊತೆಗೂಡಿ ಸಾಗುವ ಈ ಸಂಚಾರವು ಇಸ್ಲಾಮಿನ ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡಲಿದೆ. ಕುಂದಾಪುರ, ಉಡುಪಿ, ಕಾರ್ಕಳ, ಕಾಪು, ಪಡುಬಿದ್ರಿ, ಮುಲ್ಕಿ, ಸುರತ್ಕಲ್, ಮಂಗಳೂರು, ಫರಂಗಿಪೇಟೆ, ಬಿ.ಸಿ.ರೋಡು, ಕಲ್ಲಡ್ಕ ಕೇಂದ್ರವಾಗಿ ಹಾದು ಜುಲೈ 16 ರಂದು ಬೆಳಿಗ್ಗೆ 9 ಕ್ಕೆ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ಪುತ್ತೂರು ಕೇಂದ್ರಕ್ಕೆ ಆಗಮಿಸಿ ಉಪ್ಪಿನಂಗಡಿ, ಕಡಬ ಮಾರ್ಗವಾಗಿ ಸುಳ್ಯ  ಕೇಂದ್ರದಲ್ಲಿ ಸಮಾರೋಪಗೊಳ್ಳಲಿದೆ. ಪ್ರತೀ ಕೇಂದ್ರಗಳಲ್ಲೂ ಕಾಲ್ನಡಿಗೆ ಜಾಥಾ ಮತ್ತು ಸಭಾ ಕಾರ್ಯಕ್ರಮಗಳು ನಡೆಯಲಿವೆ.
ಆದುದರಿಂದ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವ್ಯಾಪ್ತಿಯ ಎಲ್ಲಾ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ತಮಗೆ ಸಾಧ್ಯವಾಗುವ ಕೇಂದ್ರಗಳಿಗೆ ಆಗಮಿಸಿ ಸೌಹಾರ್ದ ಸಂಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ ಕರೆ ನೀಡಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0