ಸುಳ್ಳು ಕೇಸ್ ದಾಖಲಿಸೋದಾಗಿ ಹೇಳಿ ಹಣ ವಸೂಲಿ : ಕಗ್ಗಲೀಪುರ 'PSI' ಹರೀಶ್ ಸಸ್ಪೆಂಡ್

Dec 16, 2025 - 11:50
ಸುಳ್ಳು ಕೇಸ್ ದಾಖಲಿಸೋದಾಗಿ ಹೇಳಿ ಹಣ ವಸೂಲಿ : ಕಗ್ಗಲೀಪುರ 'PSI' ಹರೀಶ್ ಸಸ್ಪೆಂಡ್

ಬೆಂಗಳೂರು : PSI ವಿರುದ್ಧ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿದ್ದು, ಪಿಎಸ್‌ಐ ಹರೀಶ್ ಗೆ ತಲೆದಂಡ ಆಗಿದೆ. ಅಂಗಡಿ ಮಾಲೀಕನಿಂದ ಹಣ ವಸೂಲಿ ಇದೀಗ ಸಾಬೀತು ಆಗಿದೆ. ಕಗ್ಗಲಿಪುರ ಠಾಣೆಯ ಪಿಎಸ್‌ಐ ಹರೀಶ್ ಇದೀಗ ಅಮಾನತುಗೊಂಡಿದ್ದಾರೆ. ಅಮಾನತು ಮಾಡಿ ಎಸ್ಪಿ ಶ್ರೀನಿವಾಸ್ ಗೌಡ ಆದೇಶ ಹೊರಡಿಸಿದ್ದಾರೆ.

ಅಂಗಡಿ ಮಾಲೀಕ ರಾಜೇಶ್ ಅವರ ಬಲಿಬಳಿ ಸುಳ್ಳು ಪ್ರಕರಣವನ್ನು ದಾಖಲಿಸುವುದಾಗಿ ಹೇಳಿ 1.60 ಲಕ್ಷ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. ಜ್ಯೂಸ್ ಅಂಗಡಿ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿರುವ ರಾಜೇಶ್ ನಕಲಿ ಆಧಾರ್ ಕಾರ್ಡ್ ಮಾಡಿ ಕೊಡುತ್ತಿದ್ದೀಯಾ ಎಂದು ಆರೋಪಿಸಿ ಪಿಎಸ್‌ಐ ಹರೀಶ್ 1.60 ಲಕ್ಷ ಹಣ ವಸೂಲಿ ಮಾಡಿದ್ದಾರೆ ಅಕ್ಟೋಬರ್ 29ರಂದು ಹಣ ವಸೂಲಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆರೋಪಕ್ಕೆ ಸಂಬಂಧಪಟ್ಟಂತೆ ಸಾಕ್ಷಿಗಳು ಕೂಡ ಲಭ್ಯವಾಗಿದ್ದು ಈ ಹಿನ್ನೆಲೆ ಹರೀಶ್ ನನ್ನು ಸಸ್ಪೆಂಡ್ ಮಾಡಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0