ಸೂರಿಕುಮೇರು ಯುನಿಟ್ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮ

Aug 15, 2025 - 19:17
ಸೂರಿಕುಮೇರು ಯುನಿಟ್ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮ

ಹೆಚ್ಚಿನ ವಿಷಯಗಳು ಕಪೋಕಲ್ಪಿತವಾಗಿವೆ | ಮೂಢನಂಬಿಕೆಗಳು ದೂರ ಮಾಡಿರಿ : ಬಹು|ಅಬ್ದುಲ್ ರಝಾಕ್ ಸಖಾಫಿ ತೆಕ್ಕಾರ್

ಮಾಣಿ : ಕಪೋಕಲ್ಪತ ವಿಚಾರಗಳಿಗೆ ಮನ್ನಣೆಯನ್ನು ನೀಡಬೇಡಿ ಮೂಢನಂಬಿಕೆಯು ನುಸುಳದಂತೆ ಎಚ್ಚರಿಕೆ ವಹಿಸಿರಿ ಶುಭ ಅಶುಭ ದಿನಗಳನ್ನು ಉಲಮಾಗಳಲ್ಲಿ ಕೇಳಿ ಕಲಿಯಿರಿ ಎಂದು ಬಹು|ಅಬ್ದುಲ್ ರಝಾಕ್ ಸಖಾಫಿ ತೆಕ್ಕಾರ್ ಹೇಳಿದರು. ಅವರು ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈ‌ಎಸ್, ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ಸಂಘಟನೆಯ ದ‌ಅ‌ವಾ ಕಾರ್ಯದರ್ಶಿ ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಉಸ್ತಾದರ ಬೇಂಕೆ ನಿವಾಸದಲ್ಲಿ ನಡೆದ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮಾತನಾಡಿದರು,ಕಾರ್ಯಕರ್ತ ಅಶ್ರಫ್ ಪಾರ್ಪಕಜೆ ಯವರ ಪತ್ನಿ ಮರ್ಹೂಮತ್ ಖದೀಜಾ ಸಂಶಾದ್ ರವರ ಹೆಸರಿನಲ್ಲಿ ತಹ್‌ಲೀಲ್ ಹೇಳಿ ದುಆ ಮಾಡಲಾಯಿತು,ಅಬ್ದುಲ್ ಹಮೀದ್ ಮುಸ್ಲಿಯಾರ್ ನಂದಾವರ,ಮಹ್‌ಮೂದ್ ಸ‌ಅದಿ ಬಾರೆಬೆಟ್ಟು,ನಿಝಾಂ ಸ‌ಅದಿ ಸೂರಿಕುಮೇರು, ಇಬ್ರಾಹಿಂ ಮುಸ್ಲಿಯಾರ್ ಮಾಣಿ,ನಾಯಕರುಗಳಾದ ಯೂಸುಫ್ ಹಾಜಿ, ಕರೀಂ ನೆಲ್ಲಿ,ಮಹುಮ್ಮದ್ ಹನೀಫ್ ದಮ್ಮಾಮ್,ಹಂಝ ಸೂರಿಕುಮೇರು, ಹಸೈನ್ ಟೈಲರ್,ಫಾಝಿಲ್ ಸೂರಿಕುಮೇರು ಮುಂತಾದವರು ಉಪಸ್ಥಿತರಿದ್ದರು, ಸಲೀಂ ಮಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0