ಸಿಖ್ ವ್ಯಕ್ತಿಯ ಮೇಲೆ ಚಪ್ಪಲಿ ಎಸೆದ ಆರೋಪ: ಕೇಂದ್ರ ಸಚಿವ ಸುಕಾಂತ ವಿರುದ್ಧ FIR

Jun 16, 2025 - 19:21
ಸಿಖ್ ವ್ಯಕ್ತಿಯ ಮೇಲೆ ಚಪ್ಪಲಿ ಎಸೆದ ಆರೋಪ: ಕೇಂದ್ರ ಸಚಿವ ಸುಕಾಂತ ವಿರುದ್ಧ FIR

ಕೋಲ್ಕತ್ತ: ಸಿಖ್ ವ್ಯಕ್ತಿಯ ಮೇಲೆ ಚಪ್ಪಲಿ ಎಸೆದ ಆರೋಪದ ಮೇಲೆ ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಖಾತೆ ಸಚಿವ ಸುಕಾಂತ ಮಜುಂದಾರ್‌ ವಿರುದ್ಧ ಕೋಲ್ಕತ್ತದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹೇಳಿದೆ.

ಜೂನ್ 13ರಂದು ದಕ್ಷಿಣ ಕೋಲ್ಕತ್ತದ ಕಾಲಿಘಾಟ್ ಪೊಲೀಸ್ ಠಾಣೆಯಲ್ಲಿ ಸುಕಾಂತ ಮಜುಂದಾರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಜೂನ್ 12ರಂದು ಬಿಜೆಪಿ ರಾಜ್ಯ ಘಟಕದ ಆಧ್ಯಕ್ಷರೂ ಆಗಿರುವ ಮಜುಂದಾರ್‌, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಬಳಿಯ ಹಜ್ರಾ ರಸ್ತೆ ಮತ್ತು ಹರೀಶ್ ಚಟರ್ಜಿ ಬೀದಿಯ ಕ್ರಾಸಿಂಗ್‌ನಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಸಿಖ್‌ ವ್ಯಕ್ತಿಯೊಬ್ಬರ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಮಜುಂದಾರ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 302 (ಧಾರ್ಮಿಕ ಭಾವನೆಗಳಿಗೆ ಹಾನಿ ಮಾಡುವ ಉದ್ದೇಶ) ಮತ್ತು 115(2) (ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0