ಸಾವರ್ಕರ್‌ಗೆ ಮಾತ್ರವಲ್ಲ, ಗೋಡ್ಸೆಗೂ ಬಿಜೆಪಿ ಭಾರತ ರತ್ನ ನೀಡಬಹುದು: ಅಸಾದುದ್ದೀನ್ ಓವೈಸಿ

Feb 10, 2026 - 14:37
ಸಾವರ್ಕರ್‌ಗೆ ಮಾತ್ರವಲ್ಲ, ಗೋಡ್ಸೆಗೂ ಬಿಜೆಪಿ ಭಾರತ ರತ್ನ ನೀಡಬಹುದು: ಅಸಾದುದ್ದೀನ್ ಓವೈಸಿ

ತೆಲಂಗಾಣ: ವಿನಾಯಕ ದಾಮೋದರ್ ಸಾವರ್ಕರ್ ಅವರಿಗೆ 'ಭಾರತ ರತ್ನ' ನೀಡಬೇಕೆಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಎಐಎಂಐಎಂ (AIMIM) ಅಧ್ಯಕ್ಷ ಅಸಾದುದ್ದೀನ್ ಓವೈಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "ಒಂದು ದಿನ ಬಿಜೆಪಿ ಗಾಂಧೀಜಿಯನ್ನು ಹತ್ಯೆ ಮಾಡಿದ ಗೋಡ್ಸೆಗೂ ಭಾರತ ರತ್ನ ನೀಡಿದರೂ ಅಚ್ಚರಿಯಿಲ್ಲ" ಎಂದು ಅವರು ವ್ಯಂಗ್ಯವಾಡಿದ್ದಾರೆ.

ಈ ಸಂದರ್ಭದಲ್ಲಿ ಇತಿಹಾಸದ ಪುಟಗಳನ್ನು ಸ್ಮರಿಸಿದ ಓವೈಸಿ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೈದರಾಬಾದ್‌ನ ಮಕ್ಕಾ ಮಸೀದಿಯ ಮೌಲ್ವಿ ಅಲ್ಲಾವುದ್ದೀನ್ ಅವರು ಬ್ರಿಟಿಷರ ವಿರುದ್ಧ ತೋರಿದ ಶೌರ್ಯವನ್ನು ಎತ್ತಿ ತೋರಿಸಿದರು. ಅಂದು ನಿಜಾಮರಿಗೆ ಬ್ರಿಟಿಷರ ರಕ್ಷಣೆ ಇದ್ದರೂ, ಮೌಲ್ವಿ ಅವರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧವೇ ಸಿಡಿದೆದ್ದಿದ್ದರು. ಈ ಕಾರಣಕ್ಕಾಗಿ ಅವರನ್ನು ಔರಂಗಾಬಾದ್‌ನಲ್ಲಿ ಬಂಧಿಸಿ, ಅಂಡಮಾನ್‌ನ ಭಯಾನಕ 'ಕಾಲಾ ಪಾನಿ' (ಕರಿ ನೀರು) ಶಿಕ್ಷೆಗೆ ಗುರಿಪಡಿಸಲಾಯಿತು. ಅಂಡಮಾನ್ ಜೈಲಿಗೆ ಕಳುಹಿಸಲ್ಪಟ್ಟ ಮೊದಲ ವ್ಯಕ್ತಿ ಅವರಾಗಿದ್ದು, ಬ್ರಿಟಿಷರಿಗೆ ಮಣಿಯದೆ ಅಲ್ಲಿಯೇ ಪ್ರಾಣ ಬಿಟ್ಟರು ಎಂದು ಓವೈಸಿ ವಿವರಿಸಿದ್ದಾರೆ. ಇಂತಹ ನೈಜ ಹೋರಾಟಗಾರರನ್ನು ಬಿಟ್ಟು, ಕ್ಷಮೆ ಕೇಳಿದವರಿಗೆ ಗೌರವ ನೀಡಲು ಹೊರಟಿರುವುದು ದುರದೃಷ್ಟಕರ ಎಂಬುದು ಅವರ ಆಕ್ರೋಶದ ಸಾರವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0