ದೆಹಲಿಯ ತುರ್ಕ್ಮನ್ ಗೇಟ್ನಲ್ಲಿ ಮಧ್ಯರಾತ್ರಿ ಬುಲ್ಡೋಜರ್ ರಾಜ್: ಸಂಘರ್ಷ, ಐವರು ಪೊಲೀಸರಿಗೆ ಗಾಯ
ನವದೆಹಲಿ: ದೆಹಲಿಯ ತುರ್ಕ್ಮನ್ ಗೇಟ್ನಲ್ಲಿ ಮಧ್ಯರಾತ್ರಿ ಬುಲ್ಡೋಜರ್ ರಾಜ್ ನಡೆದಿದೆ. ತೆರವು ಕಾರ್ಯಾಚರಣೆಗಾಗಿ 17 ಬುಲ್ಡೋಜರ್ಗಳು ಸ್ಥಳಕ್ಕೆ ಆಗಮಿಸಿದ್ದು, ಕಟ್ಟಡಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಯಿತು. ಮುಂಜಾನೆ ಒಂದು ಗಂಟೆ ಸುಮಾರಿಗೆ ಪೊಲೀಸರು ಮತ್ತು ಅಧಿಕಾರಿಗಳು ತೆರವು ಪ್ರಕ್ರಿಯೆಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಇದರ ಬೆನ್ನಲ್ಲೇ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ನಡೆದ ಕಲ್ಲು ತೂರಾಟದಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ. ಸಯೀಸ್ ಇಲಾಹಿ ಮಸೀದಿಯ ಒಂದು ಭಾಗವನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಕಣ್ಣೀರು ಅನಿಲ ಪ್ರಯೋಗಿಸಿದರು. ದೆಹಲಿ ಹೈಕೋರ್ಟ್ ಆದೇಶದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಧ್ವಂಸಗೊಳಿಸಲಾದ ಕಟ್ಟಡಗಳಲ್ಲಿ ಹೆಚ್ಚಿನವು ವಾಣಿಜ್ಯ ಕಟ್ಟಡಗಳಾಗಿದ್ದವು. ಅನಧಿಕೃತ ನಿರ್ಮಾಣ ಎಂಬ ಆರೋಪದ ಮೇಲೆ ಈ ಕಟ್ಟಡಗಳನ್ನು ಕೆಡವಲಾಗಿದೆ. ಈ ಹಿಂದೆ ಕಟ್ಟಡಗಳಿಗೆ ತೆರವು ನೋಟಿಸ್ ನೀಡಲಾಗಿತ್ತು, ಆದರೆ ಇವು ದೀರ್ಘಕಾಲದಿಂದ ಕಾನೂನು ಹೋರಾಟದಲ್ಲಿದ್ದವು. ಮಧ್ಯರಾತ್ರಿಯಲ್ಲಿ ತೆರವು ಪ್ರಕ್ರಿಯೆ ಆರಂಭಿಸಿದ್ದಕ್ಕೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಆದರೆ, ಸಾರ್ವಜನಿಕರಿಗೆ ಉಂಟಾಗುವ ತೊಂದರೆಯನ್ನು ತಪ್ಪಿಸಲು ಮಧ್ಯರಾತ್ರಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ. ಪ್ರತಿಭಟನಾಕಾರರನ್ನು ಗುರುತಿಸುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0



