ಹವಾಮಾನ ವಿಕೋಪಗಳಿಂದಾಗಿ ಕಳೆದ 30 ವರ್ಷದಲ್ಲಿ ಭಾರತದಲ್ಲಿ 80,000 ಜನರು ಸಾವು
ನವದೆಹಲಿ: ಕಳೆದ ಮೂವತ್ತು ವರ್ಷಗಳಲ್ಲಿ ಹವಾಮಾನ ವೈಪರೀತ್ಯ ಘಟನಾವಳಿಗಳಿಂದ ಹೆಚ್ಚು ಬಾಧಿತವಾದ ದೇಶಗಳಲ್ಲಿ ಭಾರತ ಜಗತ್ತಿನಲ್ಲೇ 9ನೇ ಸ್ಥಾನದಲ್ಲಿದೆ. ಸುಮಾರು 430 ತೀವ್ರ ಸ್ವರೂಪದ ಹವಾಮಾನ ವಿಕೋಪಗಳಿಂದ ಸುಮಾರು 80,000ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇತ್ತೀಚಿನ ಹೊಸ ವರದಿ ತಿಳಿಸಿದೆ.
ಪರಿಸರ ಚಿಂತಕರ ಚಾವಡಿ ‘ಜರ್ಮನ್ವಾಚ್’ ಬ್ರೆಜಿಲ್ನ ಬೆಲೆಮ್ನಲ್ಲಿ ಜಾಗತಿಕ ಹವಾಮಾನ ಪರಿಣಾಮಗಳ ಕುರಿತು ಚರ್ಚಿಸುವ COP30ನಲ್ಲಿ ಮಂಗಳವಾರ ಹವಾಮಾನ ಅಪಾಯ ಸೂಚ್ಯಂಕ (ಸಿಆರ್ಐ) 2026 ಎಂಬ ವರದಿ ಬಿಡುಗಡೆ ಮಾಡಿತು.
ಈ ವರದಿಯ ಪ್ರಕಾರ, ಹವಾಮಾನ ವಿಕೋಪಗಳು 1.3 ಬಿಲಿಯನ್ ಜನರ ಬದುಕಿನ ಮೇಲೆ ಪರಿಣಾಮ ಬೀರಿವೆ. ಅಷ್ಟೇ ಅಲ್ಲದೇ, 1995ರಿಂದ 2024ರ ವರೆಗೆ ಅಂದರೆ ಕಳೆದ ವರ್ಷದವರೆಗೆ ಅಂದಾಜು 170 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ನಷ್ಟ ಉಂಟುಮಾಡಿದೆ ಎಂದಿದೆ.
ಜಾಗತಿಕ ತಾಪಮಾನ ಏರಿಕೆಯೊಂದಿಗೆ ಪದೇ ಪದೇ ನಡೆಯುತ್ತಿರುವ ಪ್ರವಾಹ, ಚಂಡಮಾರುತ, ಬರ ಮತ್ತು ಶಾಖದ ಅಲೆಗಳಿಂದಾಗಿ ಭಾರತದಲ್ಲಿ ನಷ್ಟಗಳು ಹೆಚ್ಚಾಗುತ್ತಿವೆ ಎಂದು ವರದಿ ಉಲ್ಲೇಖಿಸಿದೆ. 1998ರ ಗುಜರಾತ್ ಚಂಡಮಾರುತ, 1999ರ ಒಡಿಶಾ ಚಂಡಮಾರುತ, 2013ರ ಉತ್ತರಾಖಂಡ ಪ್ರವಾಹ ಮತ್ತು ಇತ್ತೀಚಿನ ಶಾಖದಲೆಗಳ ಪರಿಣಾಮ ಭಾರತ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದೆ ಎಂಬ ಅಂಶ ವರದಿಯಲ್ಲಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0